ನರಸತ್ತವರ ರೀತಿ ವರ್ತಿಸಬೇಡಿ ಮಠಾಧಿಪತಿಗಳೇ: ಪ್ರಮೋದ್ ಮುತಾಲಿಕ್ ಕೆಂಡಾಮಂಡಲ

ಕಲಬುರಗಿಯ ರಾಘವಚೈತನ್ಯ ಶಿವಲಿಂಗ ಪೂಜೆಗೆ ಹೈಕೋರ್ಟ್ ಅನುಮತಿ ನೀಡಿದೆ. ಶ್ರೀರಾಮಸೇನೆಯ ಪ್ರಮೋದ್ ಮುತಾಲಿಕ್ ಅವರು ಈ ತೀರ್ಪನ್ನು ಸ್ವಾಗತಿಸಿದ್ದಾರೆ. ಆದರೆ ವಕ್ಫ್ ಟ್ರಿಬ್ಯುನಲ್ ಆಂದೋಲಾ ಸಿದ್ದಲಿಂಗ ಸ್ವಾಮೀಜಿಗೆ ಅನುಮತಿ ನಿರಾಕರಿಸಿರುವುದನ್ನು ಅವರು ಖಂಡಿಸಿದ್ದಾರೆ. ಹೈಕೋರ್ಟ್‌ನ ಈ ತೀರ್ಪು ಹಿಂದೂಗಳಿಗೆ ಸಂತಸ ತಂದಿದ್ದರೂ, ದೇವರ ಪೂಜೆಗೆ ನ್ಯಾಯಾಲಯದ ಅನುಮತಿ ಅಗತ್ಯ ಎಂಬುದು ದುರ್ದೈವ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.