ಪಲ್ಲವಿ ಅವರೊಂದಿಗೆ ಮಹೇಶ್ ಹಾಗೂ ಇತರರು ಫೋನಲ್ಲಿ ಮಾತಾಡಿದ್ದಾರೆ. ಅವರು ತೀವ್ರ ಸ್ವರೂಪದ ಆಘಾತಕ್ಕೊಳಗಾಗಿದ್ದರೂ ಅಧೀರರಾಗಿಲ್ಲ, ಪತಿಯ ದೇಹವನ್ನು ತರುವ ಬಗ್ಗೆ ಮಾತಾಡಿದ್ದಾರಂತೆ. ಏತನ್ಮಧ್ಯೆ, ಮಹೇಶ್ ಮತ್ತು ಮ್ಯಾಮ್ಕೋಸ್ ಸಂಸ್ಥೆಯ ಬೇರೆ ಉದ್ಯೋಗಿಗಳು ಶಿವಮೊಗ್ಗ ಜಿಲ್ಲಾಧಿಕಾರಿ, ಸಂಸದರೊಂದಿಗೆ ಮಾತಾಡಿ ಮಂಜುನಾಥ್ ಅವರ ದೇಹವನ್ನು ತರುವ ಏರ್ಪಾಟು ಮಾಡಲು ವಿನಂತಿಸಿಕೊಂಡಿದ್ದಾರೆ. ಈಗಾಗಲೇ ಗೃಹ ಸಚಿವ ಅಮಿತ್ ಶಾ ಅವರು ಸ್ಥಳಕ್ಕೆ ಧಾವಿಸಿರುವರೆಂದು ಮಹೇಶ್ ಹೇಳಿದರು.