ಅಸಲಿ ಸಂಗತಿಯೆಂದರೆ, ಪ್ರತಾಪ್ ಅವರು ಯದುವೀರ್ ಗೋಸ್ಕರ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿರುವುದು ನಿಜವಾದರೂ ಅವರಲ್ಲಿರುವ ಬೇಸರ, ಅನ್ಯಮನಸ್ಕತೆ ದೂರವಾಗಿಲ್ಲ. ಪ್ರಚಾರದ ಸಭೆಗಳಲ್ಲೂ ಅವರು ತಾವು ಮಾಡಿದ ಸಾಧನೆಗಳನ್ನೇ ಹೇಳುತ್ತಾ ತಮಗೆ ಟಿಕೆಟ್ ಸಿಗದಿರುವುದಕ್ಕೆ ವಿಕ್ಟಿಮ್ ಕಾರ್ಡ್ ಪ್ಲೇ ಮಾಡುತ್ತಾ ಸಹಾನುಭೂತಿ ಗಿಟ್ಟಿಸುವ ಪ್ರಯತ್ನ ಮಾಡುತ್ತಿದ್ದಾರೆ.