ನಿಖಿಲ್ ಹೊಸ ಚಿತ್ರಕ್ಕೆ ಮನಸಾರೆ ಹಾರೈಸಿದ ಎಚ್​ಡಿ ದೇವೇಗೌಡ

ನಿಖಿಲ್ ಕುಮಾರಸ್ವಾಮಿ ಅವರು ರಾಜಕೀಯ ಹಾಗೂ ಸಿನಿಮಾ ಎರಡರಲ್ಲೂ ಬ್ಯುಸಿ ಇದ್ದಾರೆ. ಅವರ ನಟನೆಯ ಹೊಸ ಸಿನಿಮಾ ಈಗ ಸೆಟ್ಟೇರಿದೆ. ಈ ಚಿತ್ರಕ್ಕೆ ತಮಿಳಿನ ಖ್ಯಾತ ನಿರ್ಮಾಣ ಸಂಸ್ಥೆ ಲೈಕಾ ಪ್ರೊಡಕ್ಷನ್ಸ್ ಬಂಡವಾಳ ಹೂಡುತ್ತಿದ್ದೆ. ಇತ್ತೀಚೆಗೆ ಚಿತ್ರದ ಮುಹೂರ್ತ ನೆರವೇರಿದೆ. ಈ ಕಾರ್ಯಕ್ರಮದಲ್ಲಿ ಅನೇಕ ದಿಗ್ಗಜರು ಭಾಗವಹಿಸಿದ್ದರು. ಮಾಜಿ ಪ್ರಧಾನಿ ಹಾಗೂ ನಿಖಿಲ್ ಕುಮಾರಸ್ವಾಮಿ ಅವರ ತಾತ ಎಚ್ಇಡಿ ದೇವೆಗೌಡ ಕೂಡ ಇದರಲ್ಲಿ ಭಾಗಿ ಆದರು. ಅವರು ನಿಖಿಲ್ ಹೊಸ ಚಿತ್ರಕ್ಕೆ ಮನಸಾರೆ ಹಾರೈಸಿದ್ದಾರೆ.