ಚಂಡಮಾರುತ ಮಿಚಾಂಗ್ ಸೃಷ್ಟಿಸಿದ ಹಾಲಾಹಲದ ನಡುವೆ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ರೂ. 5060 ಕೋಟಿ ತುರ್ತು ಮತ್ತು ಮಧ್ಯಂತರ ನೆರವು ಕೋರಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾರೆ. ಚಂಡಮಾರುತದ ಅಬ್ಬರಕ್ಕೆ ರಾಜ್ಯದಲ್ಲಿ 25 ಕ್ಕೂ ಹೆಚ್ಚು ಪ್ರಾಣ ಕಳೆದುಕೊಂಡಿದ್ದು ಹಲವು ಜನ ಕಣ್ಮರೆಯಾಗಿದ್ದಾರೆ.