ರೇಣುಕಾ ಸ್ವಾಮಿ ಕೊಲೆ ಕೇಸ್ನಲ್ಲಿ ಜೈಲು ಸೇರಿರುವ ನಟ ದರ್ಶನ್ ಅವರ ಪರಿಸ್ಥಿತಿಯ ಬಗ್ಗೆ ವಿನೋದ್ ರಾಜ್ ವಿವರಿಸಿದ್ದಾರೆ. ‘ಜೈಲಿನಲ್ಲಿ ದರ್ಶನ್ ಕಳೆದಿರುವ 33 ದಿನ ತುಂಬ ಕಷ್ಟ. ಸ್ವಾತಂತ್ರ ಇಲ್ಲದೇ ಒಂದೇ ಜಾಗದಲ್ಲಿ ಕುಳಿತು, ಯೋಚನೆ ಮಾಡುತ್ತಾ ಅವರು ಎಷ್ಟು ಸೊರಗಿರಬಹುದು ಅಂತ ನನ್ನ ಮನಸ್ಸಿಗೆ ನೋವಾಗುತ್ತಿದೆ’ ಎಂದು ವಿನೋದ್ ರಾಜ್ ಹೇಳಿದ್ದಾರೆ.