ಪಹಲ್ಗಾಮ್ ಉಗ್ರರ ದಾಳಿ ಭಾರತೀಯರನ್ನು ಪಕ್ಷಾತೀತವಾಗಿ ಒಗ್ಗೂಡಿಸಿದೆ ಎಂದು ಈಶ್ವರಪ್ಪ ಹೇಳಿದರು. ಕಾಂಗ್ರೆಸ್ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರು ಮೋದಿಯವರ ಸರ್ಕಾರ ತೆಗೆದುಕೊಳ್ಳುವ ಕ್ರಮಗಳಿಗೆ ಕಾಂಗ್ರೆಸ್ ಬೆಂಬಲವಾಗಿ ನಿಲ್ಲುತ್ತದೆ, ಉಗ್ರರ ವಿರುದ್ಧ ಇಡೀ ದೇಶ ಒಂದಾಗಬೇಕಿದೆ ಎಂದು ಹೇಳಿದ್ದು ಜನರಲ್ಲಿ ಸ್ಫೂರ್ತಿ ತುಂಬಿದೆ ಎಂದು ಈಶ್ವರಪ್ಪ ಹೇಳಿದರು.