ಕರ್ನಾಟಕದ ಪೊಲೀಸರನ್ನು ನಾಯಿಗಳಿಗೆ ಹೋಲಿಸಿದ ಎಂಇಎಸ್​ ಪುಂಡರು​: ಆಕ್ರೋಶ

ಬೆಳಗಾವಿಯಲ್ಲಿ ಕೆಎಸ್​ಆರ್​ಟಿಸಿ ಬಸ್​ ನಿರ್ವಾಹಕನ ಮೇಲೆ ನಡೆದ ಹಲ್ಲೆಯನ್ನು ಸಮರ್ಥಿಸಿಕೊಂಡು ಕನ್ನಡಪರ ಹೋರಾಟಗಾರರನ್ನು ಅವಮಾನಿಸಿದ ಎಂಇಎಸ್ ಕಾರ್ಯಕರ್ತ ಶುಭಂ ಶಳಕೆಯನ್ನು ಪೊಲೀಸರು ಬಂಧಿಸಿದ್ದಾರೆ. ಶಳಕೆ ಬಂಧನ ಹಿನ್ನೆಲೆಯಲ್ಲಿ ಎಂಇಎಸ್​ ಕಾರ್ಯಕರ್ತರು ಕರ್ನಾಟಕದ ಪೊಲೀಸರನ್ನು 'ನಾಯಿಗಳು' ಎಂದು ವಿವಾದಾತ್ಮಕ ಪೋಸ್ಟ್​ ಹಾಕಿದ್ದಾರೆ.