ರಮೇಶ್ ಜಾರಕಿಹೊಳಿ, ಶಾಸಕ

ಸಭೆಯಿಂದ ಹೊರಬಂದ ಬಳಿಕ ಅವರು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತಾಡಲಿಲ್ಲ. ಸರಕ್ಕನೆ ಯತ್ನಾಳ್ ಅವರ ಕಾರಿನಲ್ಲಿ ಕುಳಿತು ಬಿಟ್ಟಿದ್ದರು. ವಿಜಯಪುರದ ಶಾಸಕನ ಕೋಪ, ತಾಪ, ಅಸಹನೆ, ಅಸಮಾಧಾನ ಕನ್ನಡಿಗರಿಗೆ ಅರ್ಥವಾಗಿತ್ತು. ಆದರೆ ರಮೇಶ್ ಕೂಡ ಯಾಕೆ ದುರ್ದಾನ ತೆಗೆದುಕೊಂಡವರ ಹಾಗೆ ಅಚೆ ಬಂದರು ಅನ್ನೋದು ಗೊತ್ತಾಗಲಿಲ್ಲ. ಹಿಂಡಲಗಾ ಗಣೇಶ ಮಂದಿರದಿಂದ ಹೊರಬಂದ ಬಳಿಕ ಅವರು ಅಜ್ಞಾತ ಸ್ಥಳದ ಕಡೆ ಹೊರಟರಂತೆ.