ಹಾಸನದಲ್ಲಿ ಯತೀಂದ್ರ ಸಿದ್ದರಾಮಯ್ಯ

ಸಂಗೊಳ್ಳಿ ರಾಯಣ್ಣನ ಪ್ರತಿಮೆ ಅನಾವರಣಗೊಳಿಸಿದ ಬಳಿಕ ಯತೀಂದ್ರ ವೇದಿಕೆಯನ್ನು ತಮ್ಮ ತಂದೆಯ ಗುಣಗಾನ ಮಾಡಲು ಬಳಸಿಕೊಂಡರು. ಒಂದು ವರ್ಷದೊಳಗೆ ಜನತೆಗೆ ನೀಡಿದ ಗ್ಯಾರಂಟಿಗಳನ್ನು ಸಿದ್ದರಾಮಯ್ಯ ಜಾರಿಗೆ ತಂದಿದ್ದನ್ಮು ಶ್ಲಾಘಿಸಿದ ಯತೀಂದ್ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ರಾಜ್ಯದಲ್ಲಿ ಹೆಚ್ಚು ಸ್ಥಾನ ಗಳಿಸಿದರೆ ಅವರು ಅಡೆತಡೆಯಿಲ್ಲದೆ ಪೂರ್ಣಾವಧಿಗೆ ಮುಖ್ಯಮಂತ್ರಿಗಳಾಗಿರುತ್ತಾರೆ ಎಂದರು.