ಇದು ರಾಜ್​ಕುಮಾರ್ ಸಮಾಧಿಯಲ್ಲ..ಬೃಂದಾವನ ಎಂದಿದ್ಯಾರು ಗೊತ್ತಾ?

ರಾಜ್​ ಕುಟುಂಬದ ಸದಸ್ಯರು ಅಣ್ಣಾವ್ರ ಸಮಾಧಿಗೆ ವಿಶೇಷ ಪೂಜೆ ನೆರವೇರಿಸಿದ್ದಾರೆ. ಈ ವೇಳೆ ರಾಘವೇಂದ್ರ ರಾಜ್​ಕುಮಾರ್​ ಅವರು ಮಾತನಾಡಿದ್ದಾರೆ. ‘ನೀವು ಇದನ್ನು ಸಮಾಧಿ ಅಂತ ಕರೆಯಬೇಡಿ. ದಯವಿಟ್ಟು ಬೃಂದಾವನ ಅಂತ ಕರೆಯಿರಿ ಎಂದು ನನಗೆ ಐಎಎಸ್​ ಆಫೀಸರ್​ ಒಬ್ಬರು ಬರೆದು ಕಳಿಸಿದ್ದರು. ಬೃಂದಾವನ ಅಲ್ಲದೇ ಹೋಗಿದ್ದರೆ ಇಂದಿಗೂ ಇಷ್ಟು ಜನ ಯಾಕೆ ಬರುತ್ತಿದ್ದರು? ಪ್ರತಿ ವರ್ಷ ಅಭಿಮಾನಿಗಳು ಅನೇಕ ಕಾರ್ಯಗಳನ್ನು ಮಾಡುತ್ತಿದ್ದಾರೆ’ ಎಂದು ರಾಘವೇಂದ್ರ ರಾಜ್​ಕುಮಾರ್​ ಹೇಳಿದ್ದಾರೆ.