‘ಆ ಪ್ರಶ್ನೆಗಳಿಗೆ ದಿಟ್ಟ ಉತ್ತರ ಸಿಗಲ್ಲ’: ಸ್ಪಂದನಾ ವಿಜಯ್​ ರಾಘವೇಂದ್ರ ನಿಧನಕ್ಕೆ ರಮೇಶ್​ ಅರವಿಂದ್​ ಪ್ರತಿಕ್ರಿಯೆ

ಸ್ಪಂದನಾ ವಿಜಯ್​ ರಾಘವೇಂದ್ರ ಅವರ ನಿಧನದ ಸುದ್ದಿ ಕನ್ನಡ ಚಿತ್ರರಂಗಕ್ಕೆ ಆಘಾತ​ ತಂದಿದೆ. ಅನೇಕ ಸೆಲೆಬ್ರಿಟಿಗಳು ಸ್ಪಂದನಾ ಅಗಲಿಕೆಗೆ ಸಂತಾಪ ಸೂಚಿಸಿದ್ದಾರೆ. ವಿಜಯ್​ ರಾಘವೇಂದ್ರ ಅವರಿಗೆ ಸಾಂತ್ವನ ಹೇಳಲಾಗುತ್ತಿದೆ. ರಮೇಶ್​ ಅರವಿಂದ್​ ಕೂಡ ತಮ್ಮ ಸಾಂತ್ವನದ ನುಡಿಗಳನ್ನು ತಿಳಿಸಿದ್ದಾರೆ. ‘ಈ ಸುದ್ದಿ ಕೇಳಿ ಶಾಕಿಂಗ್​ ಎನಿಸಿತು. ವಿಜಯ್​ ರಾಘವೇಂದ್ರ ಮತ್ತು ಸ್ಪಂದನಾ ಅವರನ್ನು ಜೋಡಿಯಾಗಿ ನೋಡಿದಾಗ ಬಹಳ ಖುಷಿ ಆಗುತ್ತಿತ್ತು. ಒಬ್ಬರಿಗೊಬ್ಬರು ಸಪೋರ್ಟ್​ ಮಾಡುತ್ತಿದ್ದರು. ಆ ರೀತಿ ಇದ್ದಂತಹ ಹುಡುಗಿಗೆ ದಿಢೀರ್​ ಅಂತ ಈ ವಯಸ್ಸಿನಲ್ಲಿ ಯಾಕೆ ಹೀಗಾಯಿತು ಎಂಬ ಪ್ರಶ್ನೆ ನಮ್ಮ ಮನಸ್ಸಿನಲ್ಲಿ ಮೂಡುತ್ತದೆ. ಆದರೆ ಆ ರೀತಿಯ ಪ್ರಶ್ನೆಗಳಿಗೆ ಉತ್ತರ ಸಿಗುವುದಿಲ್ಲ. ಇದು ಬಹಳ ದುಃಖದ ವಿಚಾರ. ಯಾರಿಗೂ ಹೀಗೆ ಆಗಬಾರದು’ ಎಂದು ರಮೇಶ್​ ಅರವಿಂದ್ ಅವರು ಹೇಳಿದ್ದಾರೆ.