ಸಂಗೀತಾ ಶೃಂಗೇರಿ ಮಾಡಿದ ತಪ್ಪಿನಿಂದ ಬಿಗ್​ ಬಾಸ್​ ಮನೆ ಮಂದಿಗೆ ಉಪವಾಸವೇ ಗತಿ

ನಟಿ ಸಂಗೀತಾ ಶೃಂಗೇರಿ ಅವರು ಬಿಗ್​ ಬಾಸ್​ ಮನೆಯಲ್ಲಿ ಎಲ್ಲರ ಕೆಂಗಣ್ಣಿಗೆ ಗುರಿ ಆಗಿದ್ದಾರೆ. ಅದಕ್ಕೆ ಕಾರಣ ಆಗಿರುವುದು ಒಂದು ಎಡವಟ್ಟು. ಇಡೀ ಮನೆಗೆ ಬೇಕಾಗುವ ವಾರದ ದಿನಸಿ ಪಡೆಯಲು ಬಿಗ್​ ಬಾಸ್​ ಒಂದು ಟಾಸ್ಕ್​ ನೀಡಿದ್ದರು. ಅದರಲ್ಲಿ ಸಂಗೀತಾ ಶೃಂಗೇರಿ ಅವರು ಮಾಡಿರುವ ತಪ್ಪಿನಿಂದ ಅನೇಕ ದಿನಸಿ ವಸ್ತುಗಳನ್ನು ಕಳೆದುಕೊಳ್ಳಬೇಕಾದ ಪರಿಸ್ಥಿತಿ ಬಂದಿದೆ. ಇದರಿಂದ ವಿನಯ್​ ಗೌಡ, ತುಕಾಲಿ ಸಂತೋಷ್​ ಮುಂತಾದವರು ಬೇಸರಗೊಂಡಿದ್ದಾರೆ. ದಿನಸಿ ವಸ್ತು ಕಡಿಮೆ ಇರುವುದರಿಂದ ಬಿಗ್​ ಬಾಸ್​ ಮನೆಯ ಸ್ಪರ್ಧಿಗಳಿಗೆ ಉಪವಾಸವೇ ಗತಿ ಆಗಬಹುದು ಎಂಬ ಅನುಮಾನ ಮೂಡಿದೆ. ಈ ಸಂಚಿಕೆ ಡಿಸೆಂಬರ್​ 18ರ ರಾತ್ರಿ 9.30ಕ್ಕೆ ಪ್ರಸಾರ ಆಗಲಿದೆ. ‘ಜಿಯೋ ಸಿನಿಮಾ’ ಒಟಿಟಿಯಲ್ಲಿ 24 ಗಂಟೆಯೂ ಲೈವ್​ ನೋಡಬಹುದು.