ಖ್ಯಾತ ನಟ ಧ್ರುವ ಸರ್ಜಾ ಅವರ ಜಿಮ್ ಟ್ರೇನರ್, ಸ್ನೇಹಿತ ಪ್ರಶಾಂತ್ ಮೇಲೆ ಬೆಂಗಳೂರಿನಲ್ಲಿ ಹಲ್ಲೆ ಆಗಿದೆ. ಮಚ್ಚಿನಿಂದ ಅವರ ಮೇಲೆ ಹಲ್ಲೆ ಮಾಡಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಧ್ರುವ ಸರ್ಜಾ ಅವರು ಮಾಧ್ಯಮಗಳ ಎದುರಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಈ ಘಟನೆಗೂ ಫ್ಯಾನ್ಸ್ ವಾರ್ಗೂ ಏನಾದರೂ ಸಂಬಂಧ ಇದೆಯಾ ಎಂಬ ಪ್ರಶ್ನೆ ಎದುರಾಗಿದೆ. ಅದಕ್ಕೆ ಧ್ರುವ ಸರ್ಜಾ ಅವರು ಸ್ಪಷ್ಟನೆ ನೀಡಿದ್ದಾರೆ. ‘ದಯವಿಟ್ಟು, ಸಂಬಂಧ ಇಲ್ಲದ ವಿಷಯದಿಂದ ಸುದ್ದಿ ಮಾಡಬೇಡಿ. ಯಾವ ಫ್ಯಾನ್ಸ್ ಕೂಡ ಇಷ್ಟು ಕೀಳುಮಟ್ಟಕ್ಕೆ ಇಳಿದು ಮಾಡಲ್ಲ. ಫ್ಯಾನ್ಸ್ ವಾರ್ ಅಂತ ಯಾರೂ ಅಂದುಕೊಳ್ಳಬೇಡಿ. ಅಷ್ಟು ಚೀಪ್ ಯಾರೂ ಇಲ್ಲ. ಇದು ಕೇವಲ ಪ್ರಶಾಂತ್ ಅವರಿಗೆ ಸಂಬಂಧಿಸಿದ್ದು ಅಷ್ಟೇ. ತನಿಖೆ ಆಗುತ್ತಿದೆ, ಎಲ್ಲವೂ ಗೊತ್ತಾಗುತ್ತದೆ’ ಎಂದು ಧ್ರುವ ಸರ್ಜಾ ಹೇಳಿದ್ದಾರೆ. ಆ ಸಂದರ್ಭದ ವಿಡಿಯೋ ಇಲ್ಲಿದೆ.