ಮುಖ್ಯಮಂತ್ರಿ ಸಿದ್ದರಾಮಯ್ಯ

ರಾಜ್ಯದಲ್ಲಿ ಕೋವಿಡ್ 19 ಹೊಸ ಅಲೆ ಸೃಷ್ಟಿಯಾದ ಬಳಿಕ ಮೂರು ಜನ ಮೃತಪಟ್ಟಿರುವುದು ನಿಜವಾದರೂ, ಕೊರೋನಾ ವೈರಸ್ ರೂಪಾಂತರಿ ತಳಿ ಜೆಎನ್.1 ಸೋಂಕಿನಿಂದಲೇ ಬಲಿಯಾಗಿರುವುದು ದೃಢಪಟ್ಟಿಲ್ಲ. ಅಸುನೀಗಿದವರೆಲ್ಲ ಶ್ವಾಸಕೋಶ, ಮೂತ್ರಪಿಂಡ ಮತ್ತು ಹೃದ್ರೋಗಗಳಿಂದ ಬಳಲುತ್ತಿದ್ದಿದ್ದು ಗೊತ್ತಾಗಿದೆ. ಮಾಸ್ಕ್ ಧರಿಸಿಯೇ ಪತ್ರಿಕಾ ಗೋಷ್ಟಿ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಜನತೆಗೆ ಮಾದರಿ ಎನಿಸಿದ್ದಾರೆ.