ಅವರೊಬ್ಬ ಜನನಾಯಕ, ತಾವಿಬ್ಬರು ರಾಜಕೀಯದಲ್ಲಿ ಜತೆಯಾಗಿ ಬೆಳೆದವರು, ಭಾರತದ ಅತ್ಯುತ್ತಮ ಮುಖ್ಯಮಂತ್ರಿಗಳಲ್ಲಿ ಸಿದ್ದರಾಮಯ್ಯ ಒಬ್ಬರು ಅನ್ನೋದರಲ್ಲಿ ಅನುಮಾನವಿಲ್ಲ ಎಂದು ಅವರು ಮುಖ್ಯಮಂತ್ರಿಯವರ ಗುಣಗಾನ ಮಾಡಿದರು. ಬಿಜೆಪಿ ಸೇರೋದು ದೊಡ್ಡ ಸಂಗತಿಯೇನಲ್ಲ, ಆದರೆ ತಾನು ಆದರ್ಶಗಳನ್ನು ಪಾಲಿಸುವ ಸಿದ್ಧಾಂತವಾದಿ, ಬಿಜೆಪಿಯ ಸಿದ್ಧಾಂತ ತನಗೆ ಒಗ್ಗಲ್ಲ ಎಂದು ರಾಯರೆಡ್ಡಿ ಹೇಳಿದರು.