ಗ್ರಾಮಸ್ಥರು ಲೋಕಸಭಾ ಚುನಾವಣೆಗಾಗಿ ನಡೆಯುವ ಮತದಾನವನ್ನು ಬಹಿಷ್ಕರಿಸಿದ್ದಾರೆ. ಅದಕ್ಕೆ ಕಾರಣಗಳನ್ನು ಅವರೇ ಹೇಳುತ್ತಾರೆ. ಊರಿಂದ ಪಟ್ಟಣದ ಕಡೆ ಹೋಗಲು ಅವರಿಗೆ ಸರಿಯಾದ ರಸ್ತೆಯಿಲ್ಲ, ಊರಲ್ಲಿ ಸಮರ್ಪಕ ಕುಡಿಯುವ ನೀರಿನ ವ್ಯವಸ್ತೆಯಿಲ್ಲ, ಮತ್ತು ವಿದ್ಯುತ್ ಸಂಪರ್ಕ ನಾಮಕಾವಾಸ್ತೆ! ಪರಿಸ್ಥಿತಿ ಹೀಗಿರುವಾಗ ಇದನ್ನು ಕುಗ್ರಾಮವೆನ್ನದೆ ಮತ್ತೇನನ್ನಬೇಕು?