ತಮ್ಮ ಭಾಷಣದಲ್ಲಿ ವಿಶ್ವನಾಥ್ ಅವರು ಮುಖ್ಯಮಂತ್ರಿಯವರನ್ನು ಹಾಡಿ ಹೊಗಳಿದರು. ಕೆಂಪೇಗೌಡನ ಊರು ಯಲಹಂಕದ ಇನ್ನಷ್ಟು ಅಭಿವೃದ್ಧಿಗೆ ಅನುದಾನ ಬೇಕಿದೆಯೆಂದು ಸಿಎಂ ಗಮನಕ್ಕೆ ತಂದಿದ್ದೇನೆ, ಬಜೆಟ್ ನಂತರ ಕೊಡುತ್ತೇನೆ ಅಂದವರು ಇನ್ನೂ ಕೊಟ್ಟಿಲ್ಲ, ಅದರೆ ಅಭಿವೃದ್ಧಿ ವಿಷಯದಲ್ಲಿ ಅವರು ತಾರತಮ್ಯ ಮಾಡಲ್ಲ ಎಂದ ಅವರು ಜಾಸ್ತಿ ಅನುದಾನ ಪಡೆದಿರುವ ಕೃಷ್ಣ ಭೈರೇಗೌಡರಿಂದ ಸಾಲ ಕೇಳಿದಾಗ ಜನ ಮತ್ತೊಮ್ಮೆ ನಕ್ಕರು.