ದರ್ಶನ್​ ಕಾರಣಕ್ಕೆ ಅರೆಸ್ಟ್​ ಆದ ಅನು ಮನೆ ಎಂಥಾ ದುಸ್ಥಿತಿಯಲ್ಲಿದೆ ನೋಡಿ..

ನಟ ದರ್ಶನ್​ ಅವರನ್ನು ಆರಾಧಿಸುವ ಅಪಾರ ಸಂಖ್ಯೆಯ ಅಭಿಮಾನಿಗಳು ಇದ್ದಾರೆ. ಅಂಥವರಲ್ಲಿ ಕೆಲವರ ಪರಿಸ್ಥಿತಿ ಈಗ ಹೀನಾಯವಾಗಿದೆ. ದರ್ಶನ್​ರನ್ನು ನೋಡಬೇಕು ಎಂದು ಚಿತ್ರದುರ್ಗದಿಂದ ಬೆಂಗಳೂರಿಗೆ ಬಂದಿದ್ದ ಅನು ಅಲಿಯಾಸ್​ ಅನುಕುಮಾರ್​ ಈಗ ಪೊಲೀಸರ ಬಲೆಗೆ ಬಿದ್ದಿದ್ದಾನೆ. ದರ್ಶನ್​ ಜೊತೆ ಫೋಟೋ ತೆಗೆಸಿಕೊಳ್ಳಬೇಕು ಎಂಬುದು ಅನುಕುಮಾರ್ ಆಸೆ ಆಗಿತ್ತು. ಆ ಕಾರಣಕ್ಕಾಗಿ ಆತ ಚಿತ್ರದುರ್ಗದಿಂದ ಪಟ್ಟಣಗೆರೆ ಶೆಡ್​ಗೆ ಬಂದಿದ್ದ. ಅಲ್ಲಿಯೇ ರೇಣುಕಾ ಸ್ವಾಮಿ ಹತ್ಯೆ ನಡೆಯಿತು. ಈ ಕೇಸ್​ನಲ್ಲಿ ಹಲವರು ಆರೋಪಿಗಳಾಗಿ ವಿಚಾರಣೆ ಎದುರಿಸುತ್ತಿದ್ದಾರೆ. ಅವರ ಪೈಕಿ ಅನು ಮನೆಯ ಪರಿಸ್ಥಿತಿ ತೀರಾ ಹೀನಾಯವಾಗಿದೆ. ತುಂಬ ಬಡ ಕುಟುಂಬದ ಯುವಕನಾದ ಅನು ಬಾಳಿನಲ್ಲಿ ಈಗ ಅಂಧಕಾರ ಕವಿದಿದೆ. ಆತ ಅರೆಸ್ಟ್​ ಆಗುತ್ತಿದ್ದಂತೆಯೇ ತಂದೆ ಚಂದ್ರಣ್ಣ ಹೃದಯಾಘಾತದಿಂದ ನಿಧನರಾದರು. ಅನು ಮನೆಯಲ್ಲಿ ಈಗ ಶೋಕದ ವಾತಾವರಣ ನಿರ್ಮಾಣ ಆಗಿದೆ.