ಶಿಲ್ಪಾ ಹೆಸರಿನ ರೈತ ಮಹಿಳೆ ಅಪಾರ ಹಾನಿ ಅನುಭವಿಸಿದ್ದು, ಅವರಿಗೆ ಮಾಜಿ ಮುಖ್ಯಮಂತ್ರಿಯವರು ಸ್ಥಳದಲ್ಲೇ ₹ 50,000 ಧನ ಸಹಾಯ ಮಾಡಿದರು. ಶಿಲ್ಪಾ, ಕುಮಾರಸ್ವಾಮಿಯವರ ಪಾದ ಮುಟ್ಟಿ ಕೃತಜ್ಞತೆ ಸಲ್ಲಿಸಿದರು. ನಂತರ ಮತ್ತೊಬ್ಬ ವ್ಯಕ್ತಿ ಅಲ್ಲಿಗೆ ಬಂದು ಕೇವಲ ಫೋಟೋ ಸಲುವಾಗಿ ಕುಮಾರಸ್ವಾಮಿಯ ಪಾದ ಹಿಡಿದುಕೊಳ್ಳುತ್ತಾನೆ. ಫೋಟೋ ಕ್ಲಿಕ್ ಆದ ನಂತರವೇ ಪಾದ ಬಿಡುತ್ತಾನೆ!