ರಾಯಚೂರು ಹಿಂದುಳಿದ ಜಿಲ್ಲೆಗಳಲ್ಲಿ ಒಂದಾಗಿರುವುದರಿಂದ ಜನರಿಗೆ ಮಾಹಿತಿಯ ಕೊರತೆ ಇದೆ, ಮಷ್ಕರಗಳಿಂದ ರೈತಾಪಿ ಸಮುದಾಯ ಹೆಚ್ಚು ತೊಂದರೆಗೊಳಗಾಗುತ್ತದೆ, ಲಾರಿ ಮುಷ್ಕರ ನಡೆಯುತ್ತಿರುವ ವಿಷಯ ಜಿಲ್ಲೆಯ ಬಹಳಷ್ಟು ರೈತರಿಗೆ ಗೊತ್ತಿಲ್ಲ, ಅವರು ಹೇಗೋ ತಮ್ಮ ಬೆಳೆಯನ್ನು ಎಪಿಎಂಸಿಗೆ ತಂದರೂ ಮಂಡಿಯವರು ಖರೀದಿಗೆ ಹಿಂದೇಟು ಹಾಕುತ್ತಾರೆ ಎಂದು ನಾಗಭೂಷಣ ಹೇಳುತ್ತಾರೆ.