ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ್ರೆ ಗಲ್ಲು ಶಿಕ್ಷೆ

ಇತ್ತೀಚೆಗೆ ದೇಶದಲ್ಲಿ ಸಾಮೂಹಿಕ ಅತ್ಯಾಚಾರದ ಪ್ರಕರಣಗಳು ಹೆಚ್ಚಾಗಿದ್ವು. ಇದಕ್ಕೆ ಸಾರ್ವಜನಿಕರಿಂದ ವ್ಯಾಪಕ ಆಕ್ರೋಶ ಕೇಳಿ ಬಂದಿತ್ತು. ಇಂಡಿಯಾ ಮೈತ್ರಿಕೂಟದ ನಾಯಕರು ಮಣಿಪುರ ಹಿಂಸಾಚಾರ ಘಟನೆಯನ್ನಿಟ್ಟುಕೊಂಡು ಸಾಲು ಸಾಲು ಆರೋಪ ಮಾಡಿದ್ರು. ಇದರ ಬೆನ್ನಲ್ಲೇ ಕೇಂದ್ರ ಸರ್ಕಾರ ದೇಶದಲ್ಲಿ ಜಾರಿ ಇರುವ ಬ್ರಿಟಿಷರ ಕಾಲದ ಕ್ರಿಮಿನಲ್ ಕಾನೂನುಗಳಲ್ಲಿ ಕೆಲ ಮಹತ್ವದ ಬದಲಾವಣೆ ತರಲು ಮುಂದಾಗಿದೆ. ಈ ಸಂಬಂಧ ಕೇಂದ್ರ ಗೃಹ ಸಚಿವ ಅಮಿತ್ ಶಾ ಇವತ್ತು ಲೋಕಸಭೆಯಲ್ಲಿ ಮಹತ್ವದ ಬಿಲ್​ ಮಂಡಿಸಿದ್ದಾರೆ. ದೇಶದ್ರೋಹ, ಅತ್ಯಾಚಾರ, ಗಲಭೆ ಪ್ರಕರಣಗಳಲ್ಲಿ ಗರಿಷ್ಠ ಶಿಕ್ಷೆ ವಿಧಿಸುವ ಬಿಲ್ ಅನ್ನ ಗೃಹ ಸಚಿವರು ಮಂಡಿಸಿದ್ದಾರೆ. ಹಾಗಾದ್ರೆ ಏನೇನು ಬದಲಾವಣೆ ಆಗಿದೆ ಅನ್ನೋದನ್ನ ತೋರಿಸ್ತೀವಿ ನೋಡಿ..