ಇಂದು ಬೆಳಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸುದ್ದಿಗೋಷ್ಠಿ ನಡೆಸಲು ಹಣೆಗೆ ದೊಡ್ಡ ತಿಲಕವನ್ನಿಟ್ಟುಕೊಂಡು ಬಂದಿದ್ದನ್ನು ಗೇಲಿ ಮಾಡಿದ ಪ್ರತಾಪ್ ಸಿಂಹ, ಪಹಲ್ಗಾಮ್ ದಾಳಿಯ ನಂತರ ಯುದ್ಧ ಬೇಡ ಅನ್ನುತ್ತಿದ್ದ ಅವರು, ಜನ ತೆಗಳಲಾರಂಭಿಸಿದ ಬಳಿಕ ಟೋನ್ ಬದಲಿಸಿದರು, ಪಾಕಿಸ್ತಾನದ ಉಗ್ರರ ನೆಲೆಗಳ ಮೇಲೆ ಪ್ರಧಾನಿ ಮೋದಿಯವರು ದಾಳಿ ಮಾಡಿಸಿದ್ದನ್ನು ಸಮರ್ಥಿಸಿಕೊಳ್ಳಲು ಸಿದ್ದರಾಮಯ್ಯ ಹಣೆಗೆ ತಿಲಕವನ್ನಿಟ್ಟುಕೊಂಡು ಸಿಂಧೂರ ರಾಮಯ್ಯನಾಗಿ ಬಂದರು ಎಂದರು.