ರೈತರ ವಿಷಯದಲ್ಲಿ ಈ ಪಾಟಿ ಅಸಡ್ಡೆಯೇ? ರೈತ ಹಾಳಾದರೇನು ನನಗೆ ಸಂಬಳದ ಜೊತೆ ಗಿಂಬಳ ಸಿಗುತ್ತಲ್ಲ, ಸಾಕು ಅನ್ನೋ ಮನಸ್ಥಿತಿಯ ಅಧಿಕಾರಿಗಳಿಗೆ ಸರ್ಕಾರವೇ ಪಾಠ ಕಲಿಸಬೇಕು. ರೈತರು ಹತಾಷ ಸ್ಥಿತಿ ತಲುಪಲು ಕುಲಕರ್ಣಿ ಹಾಗೂ ನಿದ್ರಿಸುತ್ತಿರುವ ಮತ್ತೊಬ್ಬ ಅಧಿಕಾರಿಗಳೇ ಕಾರಣ. ಶೇಮ್ ಆನ್ ಯೂ ಆಫೀಸರ್ಸ್! ಕೇಂದ್ರದ ಅಧಿಕಾರಿಗಳು ನಿಮ್ಮ ಬಗ್ಗೆ ಏನು ಯೋಚಿಸಿಯಾರು ಎಂಬ ಪರಿಜ್ಞಾನವೂ ನಿಮಗಿಲ್ಲದೆ ಹೋಯಿತಲ್ಲ! ಥೂ ನಿಮ್ಮ ಮುಖಕ್ಕಿಷ್ಟು ಅಂತ ಉಗಿಯಲ್ವಾ ಅವರು?