ಭ್ರಷ್ಟಾಚಾರದ ಮೊತ್ತ ಎಷ್ಟೇ ಆಗಿರಲಿ ಅದು ಭ್ರಷ್ಟಾಚಾರವೇ ಎಂದ ಯತ್ನಾಳ್, ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳುತ್ತಿರುವ 3.16 ಎಕರೆ ಜಮೀನು ಒಬ್ಬ ದಲಿತನಿಗೆ ಸೇರಿದ್ದು, ಹಾಗಾಗಿ ಶೋಷಿತ ವರ್ಗಗಳ ಬಗ್ಗೆ ಅತೀವ ಕಾಳಜಿ ತೋರುವ ಅವರು ಜಮೀನನ್ನು ದಲಿತ ವ್ಯಕ್ತಿಗೆ ಬಿಟ್ಟುಕೊಡಲಿ, ಹಾಗೆ ಮಾಡಿದರೆ ಅವರು ದೊಡ್ಡ ಮನುಷ್ಯ ಅನಿಸಿಕೊಳ್ಳುತ್ತಾರೆ ಎಂದರು.