ಸಭಾಪತಿಗಳ ಕೊಠಡಿಯಲ್ಲಿ ನಡೆದ ವಿದ್ಯಮಾನಗಳ ಬಗ್ಗೆ ಪರಿಷತ್ ವಿರೋಧ ಪಕ್ಷದ ನಾಯಕ ಚಲವಾದಿ ದೂರು ಸಲ್ಲಿಸಿದರೂ ಯಾವುದೇ ಕ್ರಮ ಜರುಗಿಲ್ಲ, ಸಭಾಪತಿಯವರು ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿಯನ್ನು ಕರೆಸಿ ಸದನದಲ್ಲಾದರೆ ಸದಸ್ಯರು ತಮ್ಮ ಜವಾಬ್ದಾರಿ, ಅದರೆ ಸದನದ ಹೊರಗಡೆ ಅವರು ನಿಮ್ಮ ಜವಾಬ್ದಾರಿ, ರವಿ ಅವರನ್ನು ಸುರಕ್ಷಿತವಾಗಿ ಮನೆ ತಲುಪಿಸುವ ಜವಾಬ್ದಾರಿ ನಿಮ್ಮದು ಅಂತ ಮೌಖಿಕ ಆದೇಶ ನೀಡಿದರು ಎಂದು ರವಿ ಹೇಳಿದರು.