ಮಾಧ್ಯಮ ಪ್ರತಿನಿಧಿ ಸಿದ್ದರಾಮಯ್ಯ ಕಡೆ ತಿರುಗಿ, ಈಶ್ವರಪ್ಪ ಸರ್ಕಾರ ಬಿದ್ಹೋಗುತ್ತೆ ಅಂತ ಹೇಳಿದ್ದಾರಲ್ಲ ಅಂದಾಗ ಗಣ್ಯರು ಪುನಃ ನಗುತ್ತಾರೆ. ‘ಈಶ್ವರಪ್ಪ ಅದ್ಯಾವುದೋ ಭ್ರಮೆಯಲ್ಲಿದ್ದಾರೆ’ ಅಂತ ಹೇಳುತ್ತಾ ಸಿದ್ದರಾಮಯ್ಯ ಅಲ್ಲಿಂದ ಹೆಜ್ಜೆ ಹಾಕುತ್ತಾರೆ. ಸಚಿವರಾದ ಕೃಷ್ಣ ಭೈರೇಗೌಡ, ಶಿವಾನಂದ ಪಾಟೀಲ್ ಮತ್ತು ಸಂಸದರು-ರಮೇಶ್ ಜಿಗಜಿಣಗಿ ಮತ್ತು ಪಿಸಿ ಗದ್ದಿಗೌಡರ್ ಅವರನ್ನು ಸಹ ವಿಡಿಯೋದಲ್ಲಿ ನೋಡಬಹುದು.