ಪಕ್ಷದ ರಾಜ್ಯಾಧ್ಯಕ್ಷನನ್ನು ಬದಲಾಯಿಸುವ ಬಗ್ಗೆಯೂ ಅಮಿತ್ ಶಾ ಅವರು ತನ್ನೊಂದಿಗೆ ಚರ್ಚೆ ನಡೆಸಲಿಲ್ಲ, ಇನ್ನೂ ಹಲವಾರು ರಾಜ್ಯಗಳಲ್ಲಿ ಪಕ್ಷದ ಅಧ್ಯಕ್ಷನನ್ನು ಆರಿಸಬೇಕಿದೆ, ಕರ್ನಾಟಕದ ಪಾಳಿ ಈಗಲೇ ಅಲ್ಲ ಕೊನೆಯಲ್ಲಿ ಬರುತ್ತದೆ ಎಂದು ಅಶೋಕ ಹೇಳಿದರು. ರಾಜ್ಯಾಧ್ಯಕ್ಷನ ಬದಲಾವಣೆ ಬಗ್ಗೆ ತಾನು ಸಹ ಮಾಧ್ಯಮಗಳಲ್ಲಿ ನೋಡಿದೆ, ಆದರೆ ಪಕ್ಷದ ರಾಷ್ಟ್ರೀಯಮಟ್ಟದಲ್ಲಿ ಅಂಥ ಚರ್ಚೆಯೇನೂ ನಡೆದಿಲ್ಲ ಎಂದು ಅಶೋಕ ಹೇಳಿದರು.