ಸಂವಿಧಾನದ ಮೇಲಿನ ಚರ್ಚೆಗೆ ಉತ್ತರ ನೀಡುತ್ತ ಮಾತು ಮುಂದುವರಿಸಿದ ಪ್ರಧಾನ ಮಂತ್ರಿ ಮೋದಿ, ಸಂವಿಧಾನ ಸಭೆಯ ಸದಸ್ಯರಾಗಿದ್ದ ಡಾ ಎಸ್ ರಾಧಾಕೃಷ್ಣನ್ ಅವರು ಆಗ ಹೇಳಿದ್ದನ್ನು ಇವತ್ತು ಸಂಸತ್ತಿನಲ್ಲಿ ಪುನರುಚ್ಛರಿಸಿದರು. ಈ ಮಹಾನ್ ದೇಶಕ್ಕಾಗಿ ಗಣತಂತ್ರದ ವ್ಯವಸ್ಥೆ ಹೊಸತೇನೂ ಅಲ್ಲ, ಯಾಕೆಂದರೆ ಇತಿಹಾಸ ಆರಂಭಗೊಳ್ಳುವ ಮೊದಲಿನ ಅವಧಿಯಿಂದಲೂ ಇದು ಭಾರತದಲ್ಲಿತ್ತು ಎಂದು ಅವರು ಹೇಳಿದ್ದನ್ನು ಪ್ರಧಾನಿ ಮೋದಿ ಉಲ್ಲೇಖಿಸಿದರು.