ಕಲಬುರಗಿಯಲ್ಲಿ ಬಿವೈ ವಿಜಯೇಂದ್ರ

ಶಿಕ್ಷಣ ಇಲಾಖೆಯಲ್ಲಿ ಮಧು ಬಂಗಾರಪ್ಪ ಅವಾಂತರಗಳನ್ನು ಸೃಷ್ಟಿಸುತ್ತಿದ್ದಾರೆ. ತನಗೆ ಕನ್ನಡ ಬರಲ್ಲ ಅನ್ನುತ್ತಾರೆ, ಬೆಂಗಳೂರಲ್ಲಿ ಶಿಕ್ಷಕರ ತಾತ್ಕಾಲಿಕ ನೇಮಕಾತಿಯ ಉಸ್ತುವಾರಿಯನ್ನು ಲೇಬರ್ ಕಾಂಟ್ರಾಕ್ಟ್ಯರ್ ಗೆ ಒಪ್ಪಿಸುತ್ತಾರೆ ಎಂದು ಹೇಳಿದ ವಿಜಯೇಂದ್ರ, ಹೇರ್ ಕಟ್ ಸಲುವಾಗಿ ಅವರಿಗೆ ಹಣಕಾಸಿನ ಸಮಸ್ಯೆಯಿದ್ದರೆ, ತಮ್ಮ ಯುವಮೋರ್ಚಾಗೆ ಹೇಳಿ ದುಡ್ಡಿನ ವ್ಯವಸ್ಥೆ ಮಾಡಿಸುವುದಾಗಿ ಗೇಲಿ ಮಾಡಿದರು.