ಗೃಹ ಸಚಿವ ಜಿ ಪರಮೇಶ್ವರ್

ತಾವು ಕರೆದಿದ್ದ ಸಭೆ ರದ್ದಾಗಿರುವುದಕ್ಕೆ ಪರಮೇಶ್ವರ್ ಅವರಿಗೆ ಬೇಸರ ಇರೋದು ನಿಜವಾದರೂ ಅದನ್ನು ತೋರಿಸಿಕೊಳ್ಳುತ್ತಿಲ್ಲ. ತಮ್ಮ ಪಕ್ಷದಲ್ಲಿ ಹೈಕಮಾಂಡ್ ಮಾತೇ ಅಂತಿಮ, ಅಲ್ಲಿಂದ ಆದೇಶ ಬಂದರೆ ಎಲ್ಲರೂ ಪಾಲಿಸಲೇಬೇಕು, ಅವರು ಸಭೆ ನಡೆಸುವುದು ಸದ್ಯಕ್ಕೆ ಬೇಡ ಅಂತ ಹೇಳಿದ್ದಾರೆ, ತಾವು ಅದನ್ನು ಮುಂದೂಡಿದ್ದೇವೆ ಎಂದು ಪರಮೇಶ್ವರ್ ಹೇಳಿದರು.