ರಾಜ್ಯದ ಜನತೆ ಕಾಂಗ್ರೆಸ್ ಪಕ್ಷವನ್ನು ಹೇರಳವಾಗಿ ಆಶೀರ್ವದಿಸಿರುವುದರಿಂದ ಸರ್ಕಾರ ಭದ್ರವಾಗಿದೆ. ಬಿಜೆಪಿ ನಾಯಕರು ತಾವು ಕ್ರಿಯಾಶೀಲರಾಗಿದ್ದೇವೆ ಅಂತ ತೋರಿಸಿಕೊಳ್ಳಲು ಇಂಥವನ್ನೆಲ್ಲ ಮಾಡುತ್ತಿದ್ದಾರೆ. ಅವರು ಕೆಲಸ ಮಾಡಲೇಬೇಕು ಅಂತಾದ್ರೆ, ಒಬ್ಬು ವಿರೋಧ ಪಕ್ಷದ ನಾಯಕನನ್ನು ಅಯ್ಕೆ ಮಾಡಿಕೊಳ್ಳಲಿ, ಪಕ್ಷದ ರಾಜ್ಯ ಘಟಕಕ್ಕೆ ಒಬ್ಬ ಅಧ್ಯಕ್ಷನನ್ನು ಆರಿಸಿಕೊಳ್ಳಲಿ ಎಂದು ಜಗದೀಶ್ ಶೆಟ್ಟರ್ ಹೇಳಿದರು.