ಕನ್ನಡಿಗ ವೈಶಾಕ್​ನನ್ನು ಕಣಕ್ಕಿಳಿಸಿ ಪಂದ್ಯ ಗೆದ್ದ ಪಂಜಾಬ್

ಪಂದ್ಯದ ಗೆಲುವಿನ ನಂತರ ಮಾತನಾಡಿರುವ ಮುಖ್ಯ ಕೋಚ್ ರಿಕಿ ಪಾಂಟಿಂಗ್, ‘ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ವೇಗಿ ವೈಶಾಕ್ ವಿಜಯ್‌ಕುಮಾರ್ ಇಂಪ್ಯಾಕ್ಟ್ ಪ್ಲೇಯರ್ ಆಗಿ ಬೌಲಿಂಗ್ ಮಾಡಲು ಬಂದಿದ್ದು ಶ್ರೇಯಸ್ ಅಯ್ಯರ್ ಅವರಿಂದ, ಅಲ್ಲಿಂದ ಪಂದ್ಯ ಬದಲಾಯಿತು. ನಾನು ಡಗೌಟ್​ನಲ್ಲಿ ಕುಳಿತಿದ್ದೆ. ಆ ಹಂತದಲ್ಲಿ ಗುಜರಾತ್‌ ಗೆಲುವಿಗೆ ಪ್ರತಿ ಓವರ್‌ಗೆ 13-14 ರನ್‌ಗಳು ಬೇಕಾಗಿದ್ದವು. ನಾನು ಆಗ ಅಯ್ಯರ್‌ಗೆ ಸಂದೇಶ ಕಳುಹಿಸಿದೆ, ಸ್ನೇಹಿತ, ಈಗ ನೀನು ಏನು ಮಾಡುತ್ತೀಯಾ?. ಇದಕ್ಕೆ ಸರಳವಾಗಿ ಉತ್ತರಿಸಿದ ಶ್ರೇಯಸ್, ವೈಶಾಕ್‌ನನ್ನು ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಳುಹಿಸಿ. ಅವನು ಯಾರ್ಕರ್‌ಗಳನ್ನು ಎಸೆಯುತ್ತಾನೆ, ನಾವು ಈ ಪಂದ್ಯವನ್ನು ಗೆಲ್ಲುತ್ತೇವೆ.