ಛಲವಾದಿ ಸಮುದಾಯದ ಪ್ರಬಲ ನಾಯಕರಾಗಿದ್ದ ತಮ್ಮ ಪತಿಯನ್ನು ಬಿಜೆಪಿ ಬಳಸಿಕೊಂಡಿತೇ ವಿನಃ ಬೆಳಸುವ ಕೆಲಸ ಮಾಡದೆ ಮೋಸ ಮಾಡಿತು ಎಂದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡ ಬಳಿಕ ಭಾವುಕ ಸ್ವರದಲ್ಲಿ ವಾಣಿ ಹೇಳಿದರು. ಪತಿಯ ಮರಣದ ನಂತರ ಟಿಕೆಟ್ ತಮಗೆ ಸಿಗಬಹುದೆಂಬ ನಿರೀಕ್ಷೆ ಪ್ರಾಯಶಃ ಅವರಲ್ಲಿತ್ತು.