ಮಾಜಿ ಕೇಂದ್ರ ಸಚಿವರೂ ಅಗಿರುವ ಅಡ್ವಾಣಿಯವರು ಬಿಜೆಪಿಯ ಪ್ರತಿಷ್ಠಾಪನಾ ಸದಸ್ಯ ಮತ್ತು ರಾಮಜನ್ಮಭೂಮಿ ಆಂದೋಳನದ ರೂವಾರಿಯಾಗಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ ರಾಜಕೀಯ ಬದುಕು ಆರಂಭಿಸಿದ ಅಡ್ವಾಣಿ ಅವರು, ಭಾರತದ ಉಪ ಪ್ರಧಾನ ಮಂತ್ರಿಯಾಗುವ ಮಟ್ಟಕ್ಕೆ ಬೆಳೆದರು ಎಂದು ಮೋದಿ ಹೇಳಿದ್ದಾರೆ.