ಒಕ್ಕಲಿಗ ಸಮುದಾಯದ ಪ್ರಸ್ತಾಪವನ್ನು ತಾವು ಮಾಡಿಲ್ಲ, ಮುಖ್ಯಮಂತ್ರಿಯನ್ನು ಮಾಡಬೇಕಿರುವುದು ಸಮುದಾಯವಲ್ಲ, ಶಾಸಕರು ಮತ್ತು ಹೈಕಮಾಂಡ್ ಆ ಕೆಲಸವನ್ನು ಮಾಡುತ್ತಾರೆ. ಶಿವಕುಮಾರ್ ಸಿಎಂ ಆಗಬೇಕೆಂದು ಸಮುದಾಯದ ಹಿನ್ನೆಲೆಯಲ್ಲಿ ಹೇಳಿಲ್ಲ, ಚುನಾವಣೆಯಲ್ಲಿ ಶಿವಕುಮಾರ್ ಪಟ್ಟಿರುವ ಶ್ರಮವನ್ನು ನೋಡಿ ಅವರು ಸಿಎಂ ಆಗಬೇಕೆಂದು ಹೇಳಿದ್ದೇನೆ ಎಂದು ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠದ ಜಗದ್ಗುರು ಚಂದ್ರಶೇಖರನಾಥ ಸ್ವಾಮೀಜಿ ಹೇಳಿದರು.