ಸೋಜಿಗದ ಸಂಗತಿಯೆಂದರೆ ಸಂಸತ್ ಭವನ ಪ್ರವೇಶಿಸಿದ ಯುವಕರು ತಮ್ಮ ವಿಸಿಟರ್ ಪಾಸಿನ ಬಳಕೆ ಮಾಡಿದ್ದರೂ, ಸಂಸದ ಪ್ರತಾಪ್ ಸಿಂಹರಿಂದ ಇದುವರೆಗೆ ಸಾರ್ವಜನಿಕ ಹೇಳಿಕೆ ಬಂದಿಲ್ಲ. ಅವರು ಲೋಕ ಸಭಾ ಸ್ಪೀಕರ್ ಓಂ ಬಿರ್ಲಾ ಅವರನ್ನು ಭೇಟಿಯಾಗಿ ಸ್ಪಷ್ಟನೆ ನೀಡಿರೋದು ನಿಜ. ಆದರೆ, ಜನಸಾಮಾನ್ಯರಿಗೆ ಅವರು ಪಾಸು ಯಾಕೆ ನೀಡಿದ್ದು ಅಂತ ತಿಳಿಸಬೇಡವೇ? ಯುವಕರ ಮನಸ್ಥಿತಿಯ ಬಗ್ಗೆ ಸಂಸದರಿಗೆ ಗೊತ್ತಿರಲಿಕ್ಕಿಲ್ಲ, ಅದನ್ನಾದರೂ ಅವರು ಮಾಧ್ಯಮಗಳಿಗೆ ತಿಳಿಸಿದರೆ ಚೆನ್ನಾಗಿತ್ತು.