ಬೀದರ್​: ನ.24ರಿಂದ ಎರಡು ದಿನಗಳ ಕಾಲ ಅನುಭವಮಂಟಪ ಉತ್ಸವ

ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ ನವೆಂಬರ್ 23 ಮತ್ತು 24 ರಂದು 45ನೇ ಶರಣ ಕಮ್ಮಟ ಮತ್ತು ಅನುಭವಮಂಟಪ ಉತ್ಸವ ಆಚರಿಸಲಾಗುವುದು. ಸಾಮೂಹಿಕ ಇಷ್ಟಲಿಂಗ ಪೂಜೆ, ವಿವಿಧ ಮಠಾಧೀಶರ ಚರ್ಚೆ, ನಗೆಯೋಗ ಕೂಟ ಮತ್ತು ಬಸವಕಲ್ಯಾಣದ ವಿಕಾಸದ ಕುರಿತ ಚರ್ಚೆಗಳು ನಡೆಯಲಿವೆ.