ಕಳೆದ ಶುಕ್ರವಾರ ಹೊಳೆನರಸೀಪುರ ಪೊಲೀಸರು ದೇವರಾಜೇಗೌಡರನ್ನು ಚಿತ್ರದುರ್ಗ ಪೊಲೀಸರಿಂದ ತಮ್ಮ ವಶಕ್ಕೆ ಪಡೆದು ಪ್ರಾಥಮಿಕ ವಿಚಾರಣೆ ನಡೆಸಿ ನ್ಯಾಯಾಲಯದ ಮುಂದೆ ಹಾಜರು ಪಡಿಸಲು ಕರೆದೊಯ್ಯುವಾಗಲೂ ಅವರು ಥಮ್ಸ್ ಅಪ್ ಸನ್ನೆ ಮಾಡಿದ್ದರು ಮತ್ತು ಅದೇ ದಿನ ಮೆಡಿಕಲ್ ಚೆಕಪ್ ಗೆ ಒಯ್ದಾಗ ಸಹ ಅವರು ಮಾಧ್ಯಮಗಳಿಗೆ ಸತ್ಯಕ್ಕೆ ಜಯವಿದೆ ಅನ್ನುತ್ತಾ ವಿಕ್ಟರಿ ಸನ್ನೆ ತೋರಿದ್ದರು.