ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾದ ಬಳಿಕ ಬೆಂಗಳೂರಲ್ಲಿ ಮೊದಲ ವಿಧಾನ ಸಭಾ ಅಧಿವೇಶನದ ಕಾರ್ಯಕಲಾಪ ನಡೆಯುವಾಗಲೂ ದೊಡ್ಡ ಪ್ರಮಾಣದ ಭದ್ರತಾ ಲೋಪ ಸಂಭವಿಸಿತ್ತು. ವ್ಯಕ್ತಿಯೊಬ್ಬರು ಸದನ ಪ್ರವೇಶಿಸಿ ಶಾಸಕರಿಗೆ ಮೀಸಲಾದ ಆಸನದಲ್ಲಿ ಕುಳಿತುಬಿಟ್ಟಿದ್ದರು. ಆದರೆ ಆ ವ್ಯಕ್ತಿ ಅಮಾಯಕ, ಗೊತ್ತಾಗದೆ ಸದನ ಪ್ರವೇಶಿಸಿಬಿಟ್ಟಿದ್ದರು. ಆದರೆ ಇವತ್ತು ದೆಹಲಿಯಲ್ಲಿ ಸಂಸತ್ ಭವನ ನುಗ್ಗಿದವರು ಅಮಾಯಕರಲ್ಲ, ಯಾವುದೋ ಉದ್ದೇಶ ಅವರಲ್ಲಿತ್ತು.