ಇಂದು ಆರಂಭವಾಗಿರುವ ವಿಧಾನಸಭಾ ಅಧಿವೇಶನದಲ್ಲಿ ವಿರೋಧ ಪಕ್ಷದ ನಾಯಕರು ಸಿದ್ದರಾಮಯ್ಯ ಸರ್ಕಾರದ ಮೇಲೆ ದಾಳಿ ನಡೆಸಲು ಹಲವಾರು ಅಸ್ತ್ರಗಳನ್ನು ತಮ್ಮೊಂದಿಗೆ ಇಟ್ಟುಕೊಂಡಿದ್ದಾರೆ ಮತ್ತು ಅವುಗಳಲ್ಲೊಂದು ಮುಡಾ ಹಗರಣ. ಅದರೆ, ದಾಳಿ ಎದುರಿಸಲೂ ತಮ್ಮ ಬತ್ತಳಿಕೆಯಲ್ಲೂ ಅಸ್ತ್ರಗಳಿವೆ ಎಂದು ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಇಬ್ಬರೂ ಹೇಳಿದ್ದಾರೆ.