ಯಾವ ಗ್ಯಾರಂಟಿಯನ್ನೂ ವಾಗ್ದಾನ ಮಾಡಿದಂತೆ ಶೇಕಡ 100 ರಷ್ಟು ಜಾರಿಗೊಳಿಸಿಲ್ಲ. ಅವುಗಳ ಜಾರಿ ನೆಪದಲ್ಲಿ ಎಲ್ಲ ಅಭಿವೃದ್ಧಿ ಕಾರ್ಯಗಳನ್ನು ಸ್ಥಗಿತಗೊಳಿಸಲಾಗಿದೆ. ಬಿಜೆಪಿ ಆಡಳಿತಾವಧಿಯಲ್ಲಿ ಶುರುವಾಗಿದ್ದ ಕಾಮಗಾರಿಗಳನ್ನು ಸಂಪೂರ್ಣವಾಗಿ ನಿಲ್ಲಿಸಲಾಗಿದೆ ಎಂದು ಹೇಳಿದ ಯತ್ನಾಳ್, ಗುತ್ತಿಗೆದಾರರ ಬಿಲ್ ಗಳನ್ನು ಪಾವತಿಸದೆ ಸರ್ಕಾರ ನೆಪಗಳನ್ನು ಹೇಳುತ್ತಿದೆ ಎಂದರು.