‘ತೋತಾಪುರಿ 2’ ಸಿನಿಮಾ ಸೆಪ್ಟೆಂಬರ್ 28ರಂದು ರಿಲೀಸ್ ಆಗಿದೆ. ಮರುದಿನ ಅಂದರೆ ಇಂದು (ಸೆಪ್ಟೆಂಬರ್ 29) ಕರ್ನಾಟಕ ಬಂದ್ಗೆ ಕರೆ ನೀಡಲಾಗಿದೆ. ತಮಿಳುನಾಡಿಗೆ ಕಾವೇರಿ ನೀರು ಬಿಡುವ ವಿಚಾರಕ್ಕೆ ಸಂಬಂಧಿಸಿ ಈ ಬಂದ್ ನಡೆಯುತ್ತಿದೆ. ಇದು ಸಿನಿಮಾ ಕಲೆಕ್ಷನ್ ಮೇಲೆ ಪರಿಣಾಮ ಬೀರಲಿದೆ. ಈ ಬಗ್ಗೆ ‘ತೋತಾಪುರಿ 2’ ನಿರ್ಮಾಪಕ ಕೆಎ ಸುರೇಶ್ ಮಾತನಾಡಿದ್ದಾರೆ. ‘ಸಿನಿಮಾ ಚೆನ್ನಾಗಿದೆ. ಜನರು ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ. ಸೆಪ್ಟೆಂಬರ್ 29 ಬಂದ್ ಎಂದಾಗ ಶಾಕ್ ಆಯ್ತು. ಆದರೆ, ನೀರಿನ ವಿಚಾರಕ್ಕೆ ಈ ಹೋರಾಟ. ಹೀಗಾಗಿ, ಬೆಂಬಲ ಇದೆ’ ಎಂದಿದ್ದಾರೆ ಅವರು.