ಬೆಳಗಾವಿ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಮೊಸರನ್ನು ಮಣ್ಣಿನ ಪಾತ್ರೆಗಳಲ್ಲಿ ಮಾರೋದುಂಟು. ಊಟಕ್ಕೆ ಕೂತಾಗಲೂ ಮೊಸರನ್ನು ಚಿಕ್ಕಗಾತ್ರದ ಮಣ್ಣಿನ ಮಡಕೆಯಲ್ಲಿ ಇಟ್ಟಿರುತ್ತಾರೆ. ಇಲ್ಲಿ ಅದನ್ನು ಕಾಣಬಹುದು. ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರ ಮುಂದೆ ಒಂದು ಮೊಸರಿನ ಮಡಕೆ ಇದೆ. ಉತ್ತರ ಕರ್ನಾಟಕದಲ್ಲಿ ಮೊಸರು ಮತ್ತು ಶೇಂಗಾ ಹಿಂಡಿ ಇಲ್ಲದ ಊಟ ಅಪೂರ್ಣವೆನಿಸುತ್ತದೆ. ರೊಟ್ಟಿ ಜೊತೆ ಪಲ್ಯಗಳು ಮತ್ತು ಮೊಸರು, ಶೇಂಗಾ ಪುಡಿ ಚಟ್ನಿ ಇರಲೇಬೇಕು.