ಜೆಡಿಎಸ್-ಬಿಜೆಪಿ ಮೈತ್ರಿಯ ಬಳಿಕ ಜೆಡಿಎಸ್ ಹಲವಾರು, ಮಾಜಿ ಶಾಸಕರು ನಾಯಕರು ಭ್ರಮನಿರಸನಗೊಂಡು ಕಾಂಗ್ರೆಸ್ ಸೇರುತ್ತಿದ್ದಾರೆ. ಹಾಲಿ ಶಾಸಕರಲ್ಲಿ ಕೆಲವರು ಕಾಂಗ್ರೆಸ್ ಪಕ್ಷದತ್ತ ಮುಖ ಮಾಡಿರುವ ಬಗ್ಗೆ ವದಂತಿಗಳು ಸಹ ಹರಡಿವೆ. ಪ್ರಾಯಶಃ ಈ ಬೆಳವಣಿಗೆಯಿಂದ ಕಂಗೆಟ್ಟಂತಾಗಿರುವ ಕುಮಾರಸ್ವಾಮಿ, ಹತಾಶೆಯಿಂದ ಸರ್ಕಾರ ಉರುಳುತ್ತೆ ಅಂತ ಮಾತಾಡುತ್ತಿದ್ದಾರೆ.