ಬಡವರಿಗೆ ಅನ್ನ ಕೊಡಲಾಗದ ಮುಖ್ಯಮಂತ್ರಿ ಸಿದ್ದರಾಮಯ್ಯ ₹ 2 ಕೋಟಿ ಖರ್ಚು ಮಾಡಿ ತಮ್ಮ ಕಚೇರಿಯನ್ನು ರಿನೋವೇಟ್ ಮಾಡಿಸಿಕೊಳ್ಳುತ್ತಾರೆ, ಸಚಿವರ ಬಂಗ್ಲೆಗಳ ಸೌಂದರ್ಯೀಕರಣಕ್ಕಾಗಿ ₹ 40-50 ಕೋಟಿ ಖರ್ಚು ಮಾಡಲಾಗಿದೆ, ಬಿಪಿಎಲ್ ಕಾರ್ಡ್ ರದ್ದು ಕೆಲಸ ನಿಲ್ಲದೆ ಹೋದರೆ, ವಿಧಾನಸೌಧವೂ ಸೇರಿದಂತೆ ಎಲ್ಲ ಸರ್ಕಾರೀ ಕಚೇರಿಗಳಿಗೆ ಬೀಗ ಜಡಿಯಲಾಗುವುದು ಎಂದು ಅಶೋಕ ಹೇಳಿದರು.