ಹಿಂದಿನ ಬಿಜೆಪಿ ಸರ್ಕಾರದ ಲೋಪದೋಷ ಮತ್ತು ಅಸಾಮರ್ಥ್ಯವನ್ನು ಶಾಸಕ ಬಸನಗೌಡ ಪಾಟೀಲ್ ಟೀಕಿಸಿದರು. ಶಿವಮೊಗ್ಗದಲ್ಲಿ ಹಿಂದೂ ಕಾರ್ಯಕರ್ತನ ಕೊಲೆಯಾದಾಗ ತಮ್ಮ ಸರ್ಕಾರ ಏನೂ ಮಾಡಲಿಲ್ಲ, ಹುಬ್ಬಳ್ಳಿಯಲ್ಲಿ ಪೊಲೀಸ್ ಸ್ಟೇಷನ್ ಗೆ ಬೆಂಕಿ ಹಚ್ಚಿದಾಗ ಬಿಜೆಪಿ ಸರ್ಕಾರ ನಿಷ್ಕ್ರಿಯವಾಗಿತ್ತು, ಕೆಜೆ ಹಳ್ಳಿ, ಡಿಜಿ ಹಳ್ಳಿ ಪ್ರಕರಣದ ಬಗ್ಗೆ ಅಸಡ್ಡೆ ಭಾವ ತಳೆದಿತ್ತು, ಆಗಿನ ಸರ್ಕಾರ ವಿಫಲವಾಗಿದ್ದರಿಂದಲೇ ಬಿಜೆಪಿಗೆ 66 ಸ್ಥಾನ ಸಿಕ್ಕಿವೆ, ಚೆನ್ನಾಗಿ ಕೆಲಸ ಮಾಡಿದ್ದರೆ 130 ಸೀಟು ಸಿಗುತ್ತಿದ್ದವು ಎಂದು ಯತ್ನಾಳ್ ಹೇಳಿದರು.