ಕೆಲ ದಿನಗಳ ಹಿಂದೆ ಬೆಂಗಳೂರಿಗೆ ಆಗಮಿಸಿದ್ದ ಬಿ ಶ್ರೀರಾಮುಲು ಮೊದಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ನಂತರ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮನೆಗೆ ಭೇಟಿ ನೀಡಿದ್ದರು. ಹುಬ್ಬೇರಿಸಿದ ಜನ, ಅವರೇನಾದರೂ ಕಾಂಗ್ರೆಸ್ ಸೇರಲಿದ್ದಾರೆಯೇ ಅಂತ ಮಾತಾಡಿದ್ದರು. ಶ್ರೀರಾಮುಲು ಅವರೇ, ಮಗಳ ಮದುವೆಯ ಆಮಂತ್ರಣ ಪತ್ರ ನೀಡಲು ಬಂದಿದ್ದೆ ಅಂತ ಹೇಳಿ ಅವರ ಗೊಂದಲ ನಿವಾರಿಸಿದ್ದರು.