ವಿಶ್ವನಾಥ್ ಅವರು ತಾವೇ ಹೇಳಿಕೊಂಡಂತೆ ಪ್ರಾಮಾಣಿಕರೇ ಇರಬಹುದು, ಹಿಂದೆ ಸೈಟುಗಳನ್ನು ಆಫರ್ ಮಾಡಿದಾಗ ನಿರಾಕರಿಸಿರಬಹುದು, ಆದರೆ ತಾನೊಬ್ಬ ಹಿರಿಯ ರಾಜಕಾರಣಿ ಅನ್ನೋದನ್ನು ಅವರು ಮರೆಯಬಾರದು, ಭೈರತಿ ಸುರೇಶ್ ವಯಸ್ಸಿನಲ್ಲಿ ಬಹಳ ಚಿಕ್ಕವರು, ಹಾಗಂತ ಸಚಿವನನ್ನು ಮನಬಂದಂತೆ ಬಯ್ಯುವುದು ಅವರ ಹಿರಿತನಕ್ಕೆ ಶೋಭೆ ನೀಡದು. ಭಾಷೆಯ ಎಲ್ಲೆ ಮೀರದಂತೆ ಏನಾದರೂ ಹೇಳಲಿ ಅದಕ್ಕೆ ಕನ್ನಡಿಗರು ಆಕ್ಷೇಪಿಸಲಾರರು.