ಬಿವೈ ವಿಜಯೇಂದ್ರರನ್ನು ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಮಾಡಿದಾಗ ಮುನಿಸಿಕೊಂಡ ಕೆಲ ಹಿರಿಯ ಬಿಜೆಪಿ ನಾಯಕರಲ್ಲ್ಲಿ ಸಿಟಿ ರವಿ ಸಹ ಒಬ್ಬರೆನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ನಂತರದ ಎರಡು ಮೂರು ದಿನಗಳ ಕಾಲ ಅವರು ತೀವ್ರ ಹತಾಶರಾಗಿ ಮಾತಾಡಿದ್ದೂ ಇದೆ. ಆದರೆ, ಈಗ ಅವರು ಆ ಕಹಿಯನ್ನು ಮರೆತು ಮುಂದೆ ಸಾಗಿದಂತಿದೆ.